ಮಕ್ಕಳ ಬದುಕಿಗೆ ನಾವು ಮಾದರಿಯಾಗಬೇಕೆ ಹೊರತು ಮುಳ್ಳಾಗಬಾರದು
ರತ್ನಾಪುರ ಎಂಬ ಒಂದು ಪುಟ್ಟ ಹಳ್ಳಿಯಲ್ಲಿ ರಂಗಪ್ಪ ಎಂಬ ಬಡ ರೈತನಿದ್ದನು. ದಿನಾಲೂ ಹೊಲದಲ್ಲಿ ಕೆಲಸ ಮಾಡೋದು ರಾತ್ರಿ ಮಾತ್ರ ಮನೆಗೆ ಕುಡಿದು ಬರೋದು, ಕುಡಿದ ಮತ್ತಿನಲ್ಲಿ ಮನೆಯಲ್ಲಿ ಹೆಂಡತಿಯೊಂದಿಗೆ ದಿನಾಲೂ ಜಗಳವಾಡುತ್ತಿದ್ದ. ಕಾರಣವಿಲ್ಲದೆ ಜಗಳ, ಹೊಡೆಯುವುದು, ಕಿರುಕುಳ ಕೊಡುವುದು ಮಾಡುತ್ತಿದ್ದ. ಆ ರೈತನಿಗೆ ಇಬ್ಬರೂ ಹೆಣ್ಣುಮಕ್ಕಳಿದ್ದರೂ. ಆ ಮಕ್ಕಳ ಸಲುವಾಗಿ ಅವನ ಹೆಂಡತಿ ಅವನೇಷ್ಟೇ ಕಾಟ ಕೊಟ್ಟರು ಅದನ್ನ ಸಹಿಸಿಕೊಂಡು ಜೀವನ ನಡೆಸುತ್ತಿದ್ದಳು. ಹೀಗೆ ಕೆಲವು ದಿನಗಳ ನಂತರ ಅವರ ಮೊದಲ ಮಗಳ ಮದುವೆಯನ್ನು ಅದಾದ 2-3 ವರ್ಷಗಳ ನಂತರ ಎರಡನೇ ಮಗಳ ಮದುವೆಯನ್ನು ಮಾಡಿ ಮುಗಿಸುತ್ತಾರೆ. ಮಕ್ಕಳು ಗಂಡನ ಮನೆಯಲ್ಲಿ ಸುಖವಾಗಿರುತ್ತಾರೆ ಆದರೆ ಇಲ್ಲಿ ರಂಗಪ್ಪ ಹೆಣ್ಣುಮಕ್ಕಳ ಮದುವೆಗೆ ಮಾಡಿದ್ದ ಸಾಲದ ಚಿಂತೆಯಲ್ಲಿ ಮತ್ತೇ ದಿನಾಲೂ ಕುಡಿದು ಬಂದು ರಂಪಾಟ ಮಾಡುತ್ತಿರುತ್ತಾನೆ. ಹೀಗೆ ಕೆಲವು ತಿಂಗಳುಗಳ ನಂತರ ಮೊದಲ ಮಗಳ ಮನೆಯಲ್ಲಿ ಜಗಳ ಶುರುವಾಗುತ್ತದೆ. ಅಳಿಯನು ಮಾವನ ತರಹ ಕುಡಿದು ಬಂದು ಹೆಂಡತಿಗೆ ಕಿರುಕುಳ ಕೊಡಲು ಶುರುವಿಟ್ಟುಕೊಳ್ಳುತ್ತಾನೆ. ಅದನ್ನ ಸಹಿಸಲಾಗದೇ ಮೊದಲ ಮಗಳು ಅಪ್ಪನ ಬಳಿ ತನ್ನ ಅಳಲನ್ನು ತೋಡಿಕೊಳ್ಳುತ್ತಾಳೆ. ರಂಗಪ್ಪ ಸಿಟ್ಟಿಗೆದ್ದು , ಮಗಳ ಮೇಲಿನ ಪ್ರೀತಿಯಿಂದಾಗಿ ಕೂಡಲೇ ಅವರ ಮನೆಗೆ ಹೋಗಿ ಅಳಿಯನಿಗೆ ಜೋರು ಮಾಡಿ “ ಹೀಗೇಕೆ ನನ್ನ ಮಗಳಿಗೆ ಹಿಂಸೆ ಮಾಡ್ತಾ ಇದ್ದೀಯಾ ಏನಾಗಿದೆ ನಿನಗೆ” ಅಂತ ಕೇಳ್ತಾನೆ. ಆಗ ಅವನು “ನನ್ನಿಷ್ಟ ...