Posts

Showing posts from March, 2025

ಮಕ್ಕಳ ಬದುಕಿಗೆ ನಾವು ಮಾದರಿಯಾಗಬೇಕೆ ಹೊರತು ಮುಳ್ಳಾಗಬಾರದು

ರತ್ನಾಪುರ ಎಂಬ ಒಂದು ಪುಟ್ಟ ಹಳ್ಳಿಯಲ್ಲಿ ರಂಗಪ್ಪ ಎಂಬ ಬಡ ರೈತನಿದ್ದನು. ದಿನಾಲೂ ಹೊಲದಲ್ಲಿ ಕೆಲಸ ಮಾಡೋದು ರಾತ್ರಿ ಮಾತ್ರ ಮನೆಗೆ ಕುಡಿದು ಬರೋದು, ಕುಡಿದ ಮತ್ತಿನಲ್ಲಿ ಮನೆಯಲ್ಲಿ ಹೆಂಡತಿಯೊಂದಿಗೆ ದಿನಾಲೂ ಜಗಳವಾಡುತ್ತಿದ್ದ. ಕಾರಣವಿಲ್ಲದೆ ಜಗಳ, ಹೊಡೆಯುವುದು, ಕಿರುಕುಳ ಕೊಡುವುದು ಮಾಡುತ್ತಿದ್ದ. ಆ ರೈತನಿಗೆ ಇಬ್ಬರೂ ಹೆಣ್ಣುಮಕ್ಕಳಿದ್ದರೂ. ಆ ಮಕ್ಕಳ ಸಲುವಾಗಿ ಅವನ ಹೆಂಡತಿ ಅವನೇಷ್ಟೇ ಕಾಟ ಕೊಟ್ಟರು ಅದನ್ನ ಸಹಿಸಿಕೊಂಡು ಜೀವನ ನಡೆಸುತ್ತಿದ್ದಳು. ಹೀಗೆ ಕೆಲವು ದಿನಗಳ ನಂತರ ಅವರ ಮೊದಲ ಮಗಳ ಮದುವೆಯನ್ನು ಅದಾದ 2-3 ವರ್ಷಗಳ ನಂತರ ಎರಡನೇ ಮಗಳ ಮದುವೆಯನ್ನು ಮಾಡಿ ಮುಗಿಸುತ್ತಾರೆ. ಮಕ್ಕಳು ಗಂಡನ ಮನೆಯಲ್ಲಿ ಸುಖವಾಗಿರುತ್ತಾರೆ ಆದರೆ ಇಲ್ಲಿ ರಂಗಪ್ಪ ಹೆಣ್ಣುಮಕ್ಕಳ ಮದುವೆಗೆ ಮಾಡಿದ್ದ ಸಾಲದ ಚಿಂತೆಯಲ್ಲಿ ಮತ್ತೇ ದಿನಾಲೂ ಕುಡಿದು ಬಂದು ರಂಪಾಟ ಮಾಡುತ್ತಿರುತ್ತಾನೆ. ಹೀಗೆ ಕೆಲವು ತಿಂಗಳುಗಳ ನಂತರ ಮೊದಲ ಮಗಳ ಮನೆಯಲ್ಲಿ ಜಗಳ ಶುರುವಾಗುತ್ತದೆ. ಅಳಿಯನು ಮಾವನ ತರಹ ಕುಡಿದು ಬಂದು ಹೆಂಡತಿಗೆ ಕಿರುಕುಳ ಕೊಡಲು ಶುರುವಿಟ್ಟುಕೊಳ್ಳುತ್ತಾನೆ. ಅದನ್ನ ಸಹಿಸಲಾಗದೇ ಮೊದಲ ಮಗಳು ಅಪ್ಪನ ಬಳಿ ತನ್ನ ಅಳಲನ್ನು ತೋಡಿಕೊಳ್ಳುತ್ತಾಳೆ. ರಂಗಪ್ಪ ಸಿಟ್ಟಿಗೆದ್ದು , ಮಗಳ ಮೇಲಿನ ಪ್ರೀತಿಯಿಂದಾಗಿ ಕೂಡಲೇ ಅವರ ಮನೆಗೆ ಹೋಗಿ ಅಳಿಯನಿಗೆ ಜೋರು ಮಾಡಿ “ ಹೀಗೇಕೆ ನನ್ನ ಮಗಳಿಗೆ ಹಿಂಸೆ ಮಾಡ್ತಾ ಇದ್ದೀಯಾ ಏನಾಗಿದೆ ನಿನಗೆ” ಅಂತ ಕೇಳ್ತಾನೆ. ಆಗ ಅವನು “ನನ್ನಿಷ್ಟ ...

ಕಲಿಯಬೇಕೆಂಬ ಮನಸ್ಸು

Image
ಕಲಿಯುವುದಕ್ಕೆ ಮನಸ್ಸೊಂದಿದ್ದರೆ ಸಾಕು ಅಂತ ಹಿರಿಯರು ಹೇಳುತ್ತಿರುತ್ತಾರೆ ಅಲ್ವಾ ಅದಕ್ಕೆ ಉದಾಹರಣೆಯಾಗಿ ನಾನು ನನ್ನ ಜೀವನದಲ್ಲಿ ನಡೆದ ಘಟನೆಯೊಂದನ್ನು ಹೇಳ್ತೇನೆ ಕೇಳಿ. ಆಗ ನಾನು 4ನೇ ತರಗತಿಯೋ 5ನೇ ತರಗತಿಯೋ ಇರಬಹುದು, ಬೇಸಿಗೆ ರಜೆ ಇದ್ದ ಕಾರಣ ನಾನು ನಮ್ಮಜ್ಜಿ ಮನೆಯಿಂದ ನಮ್ಮಪ್ಪ, ಅಮ್ಮನ ಮನೆಗೆ ಬಂದಿದ್ದೆ. ಇದೆನಪ್ಪಾ ಎಲ್ರೂ ಬೇಸಿಗೆ ರಜೆಗೆ ಅಜ್ಜಿ ಮನೆಗೆ ಹೋದ್ರೆ ಇವ್ಳು ಅಪ್ಪ ಅಮ್ಮನ ಮನೆಗೆ ಬಂದಿದ್ದೆ ಅಂತ ಹೇಳ್ತಾ ಇದಾಳಲ್ಲ ಅಂತ ಅನ್ಕೋತಿದಿರಾ? ಹೌದು ನಾನ್ ನಮ್ಮಪ್ಪ ಅಮ್ಮನ ಮನೆಗೆ ಬಂದಿದ್ದು, ಯಾಕಂದ್ರೆ ನಾನು ಚಿಕ್ಕವಳಿದ್ದಾಗಿಂದಲೂ ನಮ್ಮಜ್ಜಿ ಮನೆಯಲ್ಲಿಯೇ ಬೆಳ್ದಿರೋದು. ನನ್ನ ಬಾಲ್ಯ ಜೀವನ, ಆಟ, ಶಾಲೆ, ಓದು ಎಲ್ಲಾ ಅಲ್ಲಿಯೇ ಆದದ್ದು. ಯಾವಾಗಲಾದರೊಮ್ಮೆಯಷ್ಟೇ ನಾನ್ ನಮ್ಮ ಮನೆಗೆ ಬರ್ತಿದ್ದಿದ್ದು, ಹಾಗಾಗಿ ಈ ರಜೆಗೂ ಬಂದಿದ್ದೆ. ರಜೆ ಸಮಯದಲ್ಲಿ ಮಕ್ಕಳಿಗೇನು ಕೆಲಸ.. ಆಟ ಆಡೋದು ಇಲ್ಲಾ ಅಂದ್ರೆ ಮಾಡ್ಬರದ ಕಿತಾಪತಿಯೆಲ್ಲಾ ಮಾಡೋದು. ಹೀಗೆ ನಾನು ಕೂಡ ಒಂದು ಕಿತಾಪತಿ ಮಾಡೊದಕ್ಕೆ ಹೋದೆ. ಏನ್ ಕಿತಾಪತಿ ಅಂತಿರಾ ಬನ್ನಿ ಮುಂದೆ ಹೇಳ್ತಾ ಹೋಗ್ತೀನಿ. ನನ್ನಕ್ಕಳದು ಒಂದು ಹಳೆಯ ಸೈಕಲ್ಲು ಮನೆಯಲ್ಲಿ ಬಿದ್ದಿತ್ತು. ಆ ಸೈಕಲ್ಲು ಎಂತಹದ್ದು ಅಂದ್ರೆ ಅದಿಕ್ಕೆ ಸರಿಯಾಗಿ ಬ್ರೇಕುಗಳಿಲ್ಲ, ಪಂಕ್ಚರ್ ಆದ ಎರಡು ಟೈಯರಗಳು, ಅದರ ಮೈಮೇಲೆ ಹೊದಿಕೆಯಂತೆ ಹೊದ್ದುಕೊಂಡಿದ್ದ ಧೂಳು, ಬಹುತೇಕ ಭಾಗಗಳು ತುಕ್ಕು ಹಿಡಿದ ಸ್ಥಿತಿಯ...